ವ್ಯಾಖ್ಯಾನಕಾರರು:
ಡಾ| ಮುಹಮ್ಮದ್ ತಕಿಯುದ್ದೀನ್ ಅಲ್ಹಿಲಾಲೀ ಮತ್ತು
ಡಾ| ಮುಹಮ್ಮದ್ ಮುಹ್ಸಿನ್ ಖಾನ್
ಕನ್ನಡ ಭಾಷಾಂತರ:
ಮುಹಮ್ಮದ್ ಹಂಝಾ ಪುತ್ತೂರು
ಈ ಕುರ್ಆನ್ (ಆಕಾಶಗಳ ಮತ್ತು ಭೂಮಿಯ ಪ್ರಭುವಾದ) ಅಲ್ಲಾಹನ ಹೊರತು ಇತರರಿಂದ ರಚಿಸಲ್ಪಡುವಂತದ್ದಲ್ಲ. ಆದರೆ ಇದು ಇದರ ಮುಂಚೆ (ಅವತೀರ್ಣವಾಗಿ) ಇರುವುದಕ್ಕಿರುವ [ಅರ್ಥಾತ್ ತೌರಾತ್(ತೋರ) ಮತ್ತು ಇಂಜೀಲ್(ಸುವಾರ್ತೆ)] ದೃಢೀಕರಣವಾಗಿದೆ. ಮತ್ತು ಗ್ರಂಥದ (ಅರ್ಥಾತ್ ಮನುಷ್ಯಕುಲಕ್ಕೆ ನಿರ್ದೇಶಿತಗೊಂಡಿರುವ ನಿಯಮಗಳ) ವಿಶದೀಕರಣವಾಗಿದೆ - ಸಂದೇಹವೇ ಇಲ್ಲ - ಇದು ’ಆಲಮೀನ್’ನ (ಮನುಷ್ಯ, ಜಿನ್ನ್ ಮತ್ತು ಅಸ್ತಿತ್ವದಲ್ಲಿರುವ ಪ್ರತಿಯೊಂದರ) ಪ್ರಭುವಿನಿಂದಾಗಿದೆ. (ಆದರಣೀಯ ಕುರ್ಆನ್ 10/37)
ಮತ್ತು ಯಾವನು ಇಸ್ಲಾಮ್ ಅಲ್ಲದ ಧರ್ಮವನ್ನು ಅರಸುತ್ತಾನೋ, ಅವನಿಂದ ಅದೆಂದೂ ಸ್ವೀಕರಿಸಲ್ಪಡಲಾರದು ಮತ್ತು ಪರಲೋಕದಲ್ಲಿ ಅವನು ನಷ್ಟಹೊಂದಿದವರಲ್ಲಿ ಸೇರುವನು. (ಆದರಣೀಯ ಕುರ್ಆನ್ 3/85)
ಅಬೂ ಹುರೈರಾ(ರ)ರಿಂದ: ಪ್ರವಾದಿ(ಸ)ರವರು ಹೇಳಿದರು: ’ಪ್ರವಾದಿಗಳಲ್ಲಿ ಒಬ್ಬನೇ ಪ್ರವಾದಿಯೂ ಇರಲಿಲ್ಲ, ಪವಾಡಗಳನ್ನು ನೀಡಲ್ಪಡದೆ. ಅದರಿಂದಾಗಿ ಜನರು ವಿಶ್ವಾಸ ತಾಳಿದರು. ಆದರೆ ನನಗೆ ನೀಡಲ್ಪಟ್ಟಿರುವುದು ಅಲ್ಲಾಹನು ನನಗೆ ಅವತೀರ್ಣಗೊಳಿಸಿದ ದೈವಿಕ ಭೋಧನೆಯಾಗಿತ್ತು (ಅರ್ಥಾತ್ ಆದರಣೀಯ ಕುರ್ಆನ್). ಆದ್ದರಿಂದ ಅಂತ್ಯದಿನದಂದು ಇತರೆಲ್ಲಾ ಪ್ರವಾದಿಗಳ ಅನುಯಾಯಿಗಳಿಗಿಂತಲೂ ನನ್ನ ಅನುಯಾಯಿಗಳು ಅಧಿಕವಾಗಿರಬೇಕು ಎಂದು ನಾನು ಆಶಿಸುತ್ತೇನೆ.’ (ಬುಖಾರಿ ತನ್ನ ’ಸಹೀಹ್’ನಲ್ಲಿ 4/1905; ಹದೀಸ್ ನಂ. 4696, ಮುಸ್ಲಿಮ್ ತನ್ನ ’ಸಹೀಹ್’ನಲ್ಲಿ 1/134; ಹದೀಸ್ ನಂ. 152)
ಜಾಬಿರ್ ಇಬ್ನ್ ಅಬ್ದಿಲ್ಲಾಹ್(ರ)ರಿಂದ: ಕೆಲವು ಮಲಕ್ಗಳು ಪ್ರವಾದಿ(ಸ)ರವರ ಬಳಿಗೆ ಅವರು ಮಲಗಿರುವಾಗ ಬಂದರು. ಅವರಲ್ಲಿ ಕೆಲವರು ಹೇಳಿದರು: ’ಅವರು ಮಲಗಿದ್ದಾರೆ.’ ಇತರರು ಹೇಳಿದರು: ’ಅವರ ಕಣ್ಣುಗಳು ಮಲಗುತ್ತವೆ ಆದರೆ ಅವರ ಹೃದಯವು ಎಚ್ಚರವಾಗಿದೆ.’ ನಂತರ ಅವರು ಹೇಳಿದರು: ’ನಿಮ್ಮ ಈ ಸಂಗಡಿಗನಿಗೆ ಒಂದು ಉದಾಹರಣೆಯಿದೆ.’ ಅವರಲ್ಲೊಬ್ಬನು ಹೇಳಿದನು: ’ಹಾಗಾದರೆ ನಿನ್ನ ಉದಾಹರಣೆಯನ್ನು ಅವರಿಗೆ ಬಿಡಿಸಿಹೇಳು.’ ಅವರಲ್ಲೊಬ್ಬನು ಹೇಳಿದನು: ’ಅವರು ಮಲಗಿದ್ದಾರೆ.’ ಇನ್ನೊಬ್ಬನು ಹೇಳಿದನು: ’ಅವರ ಕಣ್ಣುಗಳು ಮಲಗುತ್ತವೆ ಆದರೆ ಅವರ ಹೃದಯವು ಎಚ್ಚರವಾಗಿದೆ.’ ನಂತರ ಅವರು ಹೇಳಿದರು: ’ಅವರ ಉದಾಹರಣೆಯು ಹೇಗಿದೆಯೆಂದರೆ ಓರ್ವ ಮನುಷ್ಯನು ಒಂದು ಮನೆಯನ್ನು ನಿರ್ಮಿಸಿದನು ಮತ್ತು ಒಂದು ಔತಣವನ್ನು ಮಾಡಿ ಜನರನ್ನು ಆಹ್ವಾನಿಸುವುದಕ್ಕಾಗಿ ಓರ್ವ ಆಹ್ವಾನಕಾರನನ್ನು ಕಳುಹಿಸಿದನು. ಆದ್ದರಿಂದ ಯಾರೆಲ್ಲಾ ಆ ಆಹ್ವಾನಕಾರನ ಆಹ್ವಾನವನ್ನು ಸ್ವೀಕರಿಸಿದರೋ ಅವರು ಆ ಮನೆಯನ್ನು ಪ್ರವೇಶಿಸಿ ಆ ಔತಣವನ್ನು ಸವಿದರು. ಮತ್ತು ಯಾರೆಲ್ಲಾ ಆ ಆಹ್ವಾನಕಾರನ ಆಹ್ವಾನವನ್ನು ಸ್ವೀಕರಿಸಲಿಲ್ಲವೋ ಅವರು ಆ ಮನೆಯನ್ನು ಪ್ರವೇಶಿಸಲಿಲ್ಲ ಮತ್ತು ಆ ಔತಣವನ್ನು ಸವಿಯಲಿಲ್ಲ.’ ನಂತರ ಮಲಕ್ಗಳು ಹೇಳಿದರು: ’ಈ ಉದಾಹರಣೆಯನ್ನು ಅವರಿಗೆ (ಪ್ರವಾದಿಯವರಿಗೆ) ವ್ಯಾಖ್ಯಾನಿಸಿಕೊಡು, ಅವರದನ್ನು ತಿಳಿದುಕೊಳ್ಳಲಿ.’ ಅವರಲ್ಲೊಬ್ಬನು ಹೇಳಿದನು: ’ಅವರು ಮಲಗಿದ್ದಾರೆ.’ ಇತರರು ಹೇಳಿದರು: ’ಅವರ ಕಣ್ಣುಗಳು ಮಲಗುತ್ತವೆ ಆದರೆ ಅವರ ಹೃದಯವು ಎಚ್ಚರವಾಗಿದೆ.’ ನಂತರ ಅವರು ಹೇಳಿದರು: ’ಆ ಮನೆಯು ಸ್ವರ್ಗವಾಗಿದೆ ಮತ್ತು ಆ ಆಹ್ವಾನಕಾರನು ಮುಹಮ್ಮದ್(ಸ)ರವರಾ ಗಿದ್ದಾರೆ. ಯಾವನು ಮುಹಮ್ಮದ್(ಸ)ರವರನ್ನು ಅನುಸರಿಸುತ್ತಾನೋ ಅವನು ಅಲ್ಲಾಹನನ್ನು ಅನುಸರಿಸುತ್ತಾನೆ ಮತ್ತು ಯಾವನು ಮುಹಮ್ಮದ್(ಸ)ರವರನ್ನು ಧಿಕ್ಕರಿಸುತ್ತಾನೋ ಅವನು ಅಲ್ಲಾಹನನ್ನು ಧಿಕ್ಕರಿಸುತ್ತಾನೆ. ಮುಹಮ್ಮದ್(ಸ)ರವರು ಜನರನ್ನು ವಿಭಾಗಿಸಿದ್ದಾರೆ (ಅರ್ಥಾತ್ ತನ್ನ ಸಂದೇಶದ ಮೂಲಕ ಒಳಿತನ್ನು ಕೆಡುಕಿನಿಂದ ಮತ್ತು ವಿಶ್ವಾಸಿಗಳನ್ನು ಅವಿಶ್ವಾಸಿಗಳಿಂದ ವಿಭಾಗಿಸಿದ್ದಾರೆ).’ (ಬುಖಾರಿ ತನ್ನ ’ಸಹೀಹ್’ನಲ್ಲಿ 6/2655; ಹದೀಸ್ ನಂ. 6852)
ಅಬೂ ಹುರೈರಾ(ರ)ರಿಂದ: ಅಲ್ಲಾಹನ ಸಂದೇಶವಾಹಕ(ರ)ರವರು ಹೇಳಿದರು: ’ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ನಾನು ಇತರೆಲ್ಲಾ ಜನರಿಗಿಂತಲೂ ಮರ್ಯಮ್ (ಮೇರಿ)ರವರ ಮಗನಾದ ಈಸಾ(ಯೇಸು)ರವರಿಗೆ ಹೆಚ್ಚು ಹತ್ತಿರವಾಗಿದ್ದೇನೆ. ಪ್ರವಾದಿಗಳೆಲ್ಲರೂ ಪಿತೃಸಹೋದರರಾಗಿದ್ದಾರೆ, ಅವರ ತಾಯಂದಿರು ವ್ಯತ್ಯಸ್ತರಾಗಿದ್ದಾರೆ, ಆದರೆ ಅವರೆಲ್ಲರ ಧರ್ಮವು ಒಂದೇ ಆಗಿದೆ (ಅರ್ಥಾತ್ ಇಸ್ಲಾಮೀ ಏಕದೇವಾರಾಧನೆ).’ (ಬುಖಾರಿ ತನ್ನ ’ಸಹೀಹ್’ನಲ್ಲಿ 3/1270; ಹದೀಸ್ ನಂ. 3259, ಮುಸ್ಲಿಮ್ ತನ್ನ ’ಸಹೀಹ್’ನಲ್ಲಿ 4/1837; ಹದೀಸ್ ನಂ. 2365)
ಅಬೂ ಹುರೈರಾ(ರ)ರಿಂದ: ಅಲ್ಲಾಹನ ಸಂದೇಶವಾಹಕ(ರ)ರವರು ಹೇಳಿದರು: ’ಮುಹಮ್ಮದ್ನ ಆತ್ಮವು ಯಾರ ಕೈಯ್ಯಲ್ಲಿದೆಯೋ ಅವನ ಮೇಲಾಣೆ. ಈ (ಮನುಷ್ಯ) ಸಮುದಾಯದಲ್ಲಿ ಯಹೂದಿಯಾಗಲಿ, ಕ್ರೈಸ್ತನಾಗಲಿ ಇರಲಾರನು, ಅವನು ನನ್ನ ಬಗ್ಗೆ ಆಲಿಸಿದ ನಂತರವೂ, ಯಾವ ಸಂದೇಶದೊಂದಿಗೆ ನಾನು ನಿಯೋಗಿಸಲ್ಪಟ್ಟೆನೋ ಆ ಸಂದೇಶದ ಮೇಲೆ ವಿಶ್ವಾಸ ತಾಳದೆ ಮೃತಪಡುವುದಾದರೆ, ನರಕವಾಸಿಗಳಲ್ಲಿ ಸೇರಿದವನಾಗಿರುವ ಹೊರತು.’ (ಮುಸ್ಲಿಮ್ ತನ್ನ ’ಸಹೀಹ್’ನಲ್ಲಿ 1/134; ಹದೀಸ್ ನಂ. 153)
ಸೋಮವಾರ, ಜುಲೈ 6, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ